ಇಲ್ಲಿ ಬರುವ ಎಲ್ಲ ಗ್ರಾಮದೇವತೆಗಳು ಶ್ರಮಮೂಲದ ಸಮುದಾಯಗಳು ಕಟ್ಟಿಕೊಂಡ ಪರಂಪರೆಯೊಳಗಿನ ಕಾಲ್ಪನಿಕ ದೈವರೂಪಗಳು, ಸಹಜವಾಗಿ ಈ ಎಲ್ಲ ದೈವಗಳು ಮನುಷ್ಯರ ಸಣ್ಣತನ, ತಾರತಮ್ಯ, ದ್ವೇಷ, ಅಸೂಯೆ, ಪ್ರೀತಿ, ಅಸಹನೆ ಇಂತಹ ಗುಣವಿಶೇಷಗಳ ಸಾರರೂಪಗಳೇ ಆಗಿವೆ. ಒಂದು ಗ್ರಾಮಕ್ಕೆ ಒಬ್ಬ ದೇವತೆಯಲ್ಲ. ಗ್ರಾಮದೊಳಕ್ಕೆ ಕುಲಗಳೆಷ್ಟಿರುತ್ತವೆಯೋ ಅಷ್ಟು ಕುಲದೈವಗಳು ಗ್ರಾಮದ ತುಂಬ ಇರುತ್ತವೆ. ಜಾತಿಮೂಲದ ನಂಬಿಕೆಗಳಿಗೆ ಅನುಗುಣವಾಗಿ ಆ ದೈವಗಳ ವೇಷಭೂಷಣ, ಆಚಾರ - ವಿಚಾರ ಇತ್ಯಾದಿ ವಿಶೇಷತೆಗಳನ್ನು ಒಳಗೊಂಡಿರುತ್ತವೆ. ಸಿದ್ಧಲಿಂಗಯ್ಯನವರು ಈ ಎಲ್ಲ ದೇವತೆಗಳನ್ನು ಕ್ಷೇತ್ರಾಧ್ಯಯನಕ್ಕೆ ಒಳಪಡಿಸಿದಾಗ ಅದೊಂದು ವಿಚಿತ್ರಲೋಕವಾಗಿ, ವಿಸ್ಮಯ ಹುಟ್ಟಿಸುವ ವಿಶೇಷ ಪ್ರಪಂಚವಾಗಿ ಅವರಿಗೆ ಗೋಚರಿಸಿದೆ. ಹೀಗಾಗಿ ನಂಬಿಕೆ, ವೈಚಾರಿಕತೆ, ವೈಜ್ಞಾನಿಕ ಮನೋಧರ್ಮ, ತಾರ್ಕಿಕ ನ್ಯಾಯದೃಷ್ಟಿ ಇವೆಲ್ಲವುಗಳನ್ನು ಎಚ್ಚರದ ಪ್ರಜ್ಞೆಯಲ್ಲಿ ಈ ಸಂಸ್ಕೃತಿ ವಿಶ್ಲೇಷಣೆಗೆ ಬಳಸಿಕೊಂಡಿದ್ದಾರೆ. ಅವರ ಲಘು ಹಾಸ್ಯ ಮನೋಧರ್ಮ ಇಲ್ಲಿಯ ವಿಶ್ಲೇಷಣೆಗೆ ಹೊಸಬಗೆಯ ಓದಿನ ಆಯಾಮವನ್ನು ಕೊಟ್ಟಿದೆ.
ಗುರುತು ಸಂಖ್ಯೆ | KPP 0393 |
ಲೇಖಕರು | ಡಾ. ಸಿದ್ಧಲಿಂಗಯ್ಯ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2018 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 470/- |
ಪುಟಗಳು | 546 |
ಇಲ್ಲಿ ಬರುವ ಎಲ್ಲ ಗ್ರಾಮದೇವತೆಗಳು ಶ್ರಮಮೂಲದ ಸಮುದಾಯಗಳು ಕಟ್ಟಿಕೊಂಡ ಪರಂಪರೆಯೊಳಗಿನ ಕಾಲ್ಪನಿಕ ದೈವರೂಪಗಳು, ಸಹಜವಾಗಿ ಈ ಎಲ್ಲ ದೈವಗಳು ಮನುಷ್ಯರ ಸಣ್ಣತನ, ತಾರತಮ್ಯ, ದ್ವೇಷ, ಅಸೂಯೆ, ಪ್ರೀತಿ, ಅಸಹನೆ ಇಂತಹ ಗುಣವಿಶೇಷಗಳ ಸಾರರೂಪಗಳೇ ಆಗಿವೆ. ಒಂದು ಗ್ರಾಮಕ್ಕೆ ಒಬ್ಬ ದೇವತೆಯಲ್ಲ. ಗ್ರಾಮದೊಳಕ್ಕೆ ಕುಲಗಳೆಷ್ಟಿರುತ್ತವೆಯೋ ಅಷ್ಟು ಕುಲದೈವಗಳು ಗ್ರಾಮದ ತುಂಬ ಇರುತ್ತವೆ. ಜಾತಿಮೂಲದ ನಂಬಿಕೆಗಳಿಗೆ ಅನುಗುಣವಾಗಿ ಆ ದೈವಗಳ ವೇಷಭೂಷಣ, ಆಚಾರ - ವಿಚಾರ ಇತ್ಯಾದಿ ವಿಶೇಷತೆಗಳನ್ನು ಒಳಗೊಂಡಿರುತ್ತವೆ. ಸಿದ್ಧಲಿಂಗಯ್ಯನವರು ಈ ಎಲ್ಲ ದೇವತೆಗಳನ್ನು ಕ್ಷೇತ್ರಾಧ್ಯಯನಕ್ಕೆ ಒಳಪಡಿಸಿದಾಗ ಅದೊಂದು ವಿಚಿತ್ರಲೋಕವಾಗಿ, ವಿಸ್ಮಯ ಹುಟ್ಟಿಸುವ ವಿಶೇಷ ಪ್ರಪಂಚವಾಗಿ ಅವರಿಗೆ ಗೋಚರಿಸಿದೆ. ಹೀಗಾಗಿ ನಂಬಿಕೆ, ವೈಚಾರಿಕತೆ, ವೈಜ್ಞಾನಿಕ ಮನೋಧರ್ಮ, ತಾರ್ಕಿಕ ನ್ಯಾಯದೃಷ್ಟಿ ಇವೆಲ್ಲವುಗಳನ್ನು ಎಚ್ಚರದ ಪ್ರಜ್ಞೆಯಲ್ಲಿ ಈ ಸಂಸ್ಕೃತಿ ವಿಶ್ಲೇಷಣೆಗೆ ಬಳಸಿಕೊಂಡಿದ್ದಾರೆ. ಅವರ ಲಘು ಹಾಸ್ಯ ಮನೋಧರ್ಮ ಇಲ್ಲಿಯ ವಿಶ್ಲೇಷಣೆಗೆ ಹೊಸಬಗೆಯ ಓದಿನ ಆಯಾಮವನ್ನು ಕೊಟ್ಟಿದೆ.